ಚಂದ್ರಗ್ರಹಣ 2026
2026ರ ಎರಡನೇ ಚಂದ್ರಗ್ರಹಣ ಆಗಸ್ಟ್ 28ರಂದು ಸಂಭವಿಸಲಿದೆ. ಬೆಳಿಗ್ಗೆ 6:53ಕ್ಕೆ ಆರಂಭವಾಗುವ ಈ ಗ್ರಹಣ ಮಧ್ಯಾಹ್ನ 12:31ಕ್ಕೆ ಅಂತ್ಯಗೊಳ್ಳುವ ನಿರೀಕ್ಷೆಯಿದೆ. ಭಾರತದಲ್ಲಿ ಈ ಚಂದ್ರಗ್ರಹಣ ಗೋಚರಿಸುವುದಿಲ್ಲ. ಹೀಗಾಗಿ ಭಾರತದಲ್ಲಿ ಸೂತಕ ಅವಧಿ ಹಾಗೂ ಅದಕ್ಕೆ ಸಂಬಂಧಿಸಿದ ನಿಯಮಗಳು ಅನ್ವಯಿಸುವುದಿಲ್ಲ ಎಂದು ಪರಿಗಣಿಸಲಾಗುತ್ತದೆ.
ಆದರೆ ಜ್ಯೋತಿಷ್ಯದ ಪ್ರಕಾರ, ಗ್ರಹಣದ ಪ್ರಭಾವ ಕೆಲವು ರಾಶಿಗಳ ಮೇಲೆ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ವಿಶೇಷವಾಗಿ ಕರ್ಕಾಟಕ, ತುಲಾ ಮತ್ತು ಧನು ರಾಶಿಯವರು ಈ ಅವಧಿಯಲ್ಲಿ ಕೆಲವು ವಿಚಾರಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಒಳಿತು.
ಕರ್ಕಾಟಕ ರಾಶಿಯವರು ಈ ಸಮಯದಲ್ಲಿ ಹೊಸ ಉದ್ಯಮ ಅಥವಾ ಪ್ರಮುಖ ಕೆಲಸಗಳನ್ನು ಆರಂಭಿಸುವ ಮುನ್ನ ಎಚ್ಚರಿಕೆಯಿಂದ ಯೋಚಿಸಬೇಕು. ಅನಗತ್ಯ ಪ್ರಯಾಣವನ್ನು ಮುಂದೂಡುವುದು ಒಳಿತು. ಕುಟುಂಬದಲ್ಲಿ ಸಣ್ಣಪುಟ್ಟ ವಿಚಾರಗಳು ವಿವಾದಕ್ಕೆ ಕಾರಣವಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ಆತುರದಿಂದ ನಿರ್ಧಾರ ಕೈಗೊಳ್ಳುವುದನ್ನು ತಪ್ಪಿಸಿ. ಹಣಕಾಸು ವ್ಯವಹಾರಗಳು ಹಾಗೂ ಸ್ನೇಹಿತರೊಂದಿಗಿನ ಸಂಬಂಧದಲ್ಲಿಯೂ ಜಾಗರೂಕರಾಗಿರುವುದು ಉತ್ತಮ.
ತುಲಾ ರಾಶಿಯವರು ಈ ಅವಧಿಯಲ್ಲಿ ಆರೋಗ್ಯದ ಕಡೆ ನಿರ್ಲಕ್ಷ್ಯ ತೋರಬಾರದು. ಹಣಕಾಸಿನ ವಿಚಾರಗಳಲ್ಲಿ ದುಡುಕಿನ ನಿರ್ಧಾರಗಳು ನಷ್ಟಕ್ಕೆ ಕಾರಣವಾಗುವ ಸಾಧ್ಯತೆ ಇದೆ. ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ನೀಡುವುದು ಅಥವಾ ಪರಿಶೀಲನೆ ಇಲ್ಲದೆ ಹೂಡಿಕೆ ಮಾಡುವುದು ತಪ್ಪಿಸುವುದು ಸೂಕ್ತ. ಉದ್ಯೋಗದಲ್ಲಿ ಏರಿಳಿತಗಳು ಎದುರಾಗಬಹುದು. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರಗಳಿದ್ದರೆ ಹೆಚ್ಚಿನ ಎಚ್ಚರಿಕೆ ಅಗತ್ಯ. ಮುಖ್ಯವಾಗಿ, ಮಾತನಾಡುವಾಗ ಪದಗಳ ಆಯ್ಕೆಯ ಬಗ್ಗೆ ಗಮನವಿರಲಿ.
ಇದನ್ನೂ ಓದಿ: 24 ಗಂಟೆಗಳಲ್ಲಿ ಬದಲಾಗಲಿವೆ ಇವರ ಅದೃಷ್ಟ! ಹಣ, ಉದ್ಯೋಗ, ಸಂತೋಷ ರಾಜಯೋಗದ ಫಲ
ಧನು ರಾಶಿಯವರಿಗೆ ಈ ಅವಧಿಯಲ್ಲಿ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಹಿಂದೆ ಬಗೆಹರಿದಿದ್ದ ಕೆಲವು ವಿವಾದಗಳು ಮತ್ತೆ ಮುನ್ನೆಲೆಗೆ ಬರಬಹುದು. ಕುಟುಂಬದವರು ಅಥವಾ ಆಪ್ತರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇರುವುದರಿಂದ ತಾಳ್ಮೆಯಿಂದ ವರ್ತಿಸುವುದು ಮುಖ್ಯ. ಕೋಪದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದೆ, ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಹೆಜ್ಜೆ ಇಡಿ. ಕುಟುಂಬ ಜೀವನದಲ್ಲಿ ನೆಮ್ಮದಿ ಮುಂದುವರಿಯಬಹುದಾದರೂ, ವೃತ್ತಿಜೀವನದಲ್ಲಿ ತಾಳ್ಮೆ ಮತ್ತು ಸಂಯಮ ಕಾಪಾಡಿಕೊಳ್ಳುವುದು ಅಗತ್ಯ.
ಸೂಚನೆ: ಮೇಲಿನ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು ಮತ್ತು ಸಾಮಾನ್ಯ ರಾಶಿಫಲದ ಆಧಾರದ ಮೇಲೆ ನೀಡಲಾಗಿದೆ. ಇದನ್ನು ವೈಜ್ಞಾನಿಕ ಭವಿಷ್ಯವಾಣಿ ಎಂದು ಪರಿಗಣಿಸಬಾರದು.
ಆರಾಧ್ಯ ಅವರು ಐದು ವರ್ಷಗಳಿಂದ ಜ್ಯೋತಿಷ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅನುಭವ ಹೊಂದಿರುವ ಕಂಟೆಂಟ್ ರೈಟರ್. ಜ್ಯೋತಿಷ್ಯ ವಿಷಯಗಳನ್ನು ಆಧಾರಿತ ಮಾಹಿತಿಯೊಂದಿಗೆ ಸಂಶೋಧಿಸಿ, ಸರಳ ಮತ್ತು ನಿಖರ ರೀತಿಯಲ್ಲಿ ಓದುಗರಿಗೆ ತಲುಪಿಸುವಲ್ಲಿ ಅವರಿಗೆ ವಿಶೇಷ ನೈಪುಣ್ಯ ಇದೆ. ವಿಶ್ವಾಸಾರ್ಹ ಮತ್ತು ಉಪಯುಕ್ತ ಮಾಹಿತಿಯನ್ನು ನೀಡುವುದು ಅವರ ಬರವಣಿಗೆಯ ಮೂಲ ಸಿದ್ಧಾಂತ.
