
ಗರ್ಭಿಣಿ ಹಸುವಿನ ತಲೆ ಕಡಿದು ದೇಹ ಕೊಂಡೊಯ್ದ ದುಷ್ಟರು
ಕರ್ನಾಟಕದಲ್ಲಿ ಹಸುಗಳ ಮೇಲಿನ ಕ್ರೌರ್ಯದ ಘಟನೆಗಳು ನಿರಂತರವಾಗಿ ವರದಿಯಾಗುತ್ತಿವೆ. ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಾಲು ತುಂಬಿದ ಹಸುಗಳ ಕೆಚ್ಚಲು ಕೊಯ್ದು, ಮೈಸೂರಿನಲ್ಲಿ ಹಸುವಿನ ಬಾಲಕ್ಕೆ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆಗಳು ಬೆಳಕಿಗೆ ಬಂದಿದ್ದವು. ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಗರ್ಭಿಣಿ ಹಸುವಿನ ತಲೆ ಕಡಿದು ದೇಹವನ್ನು ಕದ್ದಿರುವ ಘಟನೆ ನಡೆದಿರುವುದು ಸಮಾಜದಲ್ಲಿ ಆತಂಕವನ್ನು ಹುಟ್ಟುಹಾಕಿದೆ. ಈ ನಿರಂತರವಾಗಿ ನಡೆಯುತ್ತಿರುವ ಕ್ರೌರ್ಯದ ಕೃತ್ಯಗಳು ಸಮಾಜದಲ್ಲಿ ಮಾನವೀಯತೆಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (Honnavar) ತಾಲೂಕಿನ ಸಾಲ್ಕೋಡು ಗ್ರಾಮದಲ್ಲಿ ಭೀಕರ ಘಟನೆ ನಡೆದಿದ್ದು, ಒಂದು ಹಸುವಿನ ಹತ್ಯೆ ಮಾಡಲಾಗಿದೆ. ಕೃಷ್ಣ ಆಚಾರಿ ಎಂಬ ರೈತನಿಗೆ ಸೇರಿದ ಈ ಹಸು, ನಿನ್ನೆ (January 18) ಮನೆಯಿಂದ ಮೇಯಲು ಹೋಗಿದ್ದರೂ ರಾತ್ರಿ ವಾಪಸ್ ಬಂದಿರಲಿಲ್ಲ. ಇಂದು ಬೆಳಿಗ್ಗೆ ಹುಡುಕಾಟ ನಡೆಸಿದಾಗ ಹಸುವಿನ ಕಾಲು, ರುಂಡ ಮತ್ತು ರಕ್ತವನ್ನು ಕಂಡು ಕೃಷ್ಣ ಆಚಾರಿ ಆಘಾತಕ್ಕೊಳಗಾಗಿದ್ದಾರೆ.
ಸ್ಥಳೀಯರು ವ್ಯಕ್ತಪಡಿಸಿರುವ ಶಂಕೆಯ ಪ್ರಕಾರ, ಹಸುವಿನ ಮಾಂಸ ಭಕ್ಷಣೆಗಾಗಿ ಈ ಕೃತ್ಯ ನಡೆಸಿರಬಹುದು. ಕಾಡು ಪ್ರಾಣಿಗಳ ದಾಳಿಯಲ್ಲಿ ಹಸುವಿನ ದೇಹವು ಇಷ್ಟು ಸುಲಭವಾಗಿ ತುಂಡಾಗುವುದು ಸಾಧ್ಯವಿಲ್ಲ. ಹಸುವಿನ ತಲೆ ಮತ್ತು ಕಾಲುಗಳನ್ನು ಪ್ರತ್ಯೇಕವಾಗಿ ಬೇರ್ಪಡಿಸಿರುವ ರೀತಿ ನೋಡಿದರೆ ಇದು ಯೋಜಿತ ಕೃತ್ಯ ಎಂಬುದು ಸ್ಪಷ್ಟವಾಗುತ್ತದೆ.
ದೇಸಿ ಹಸುಗಳ ಗೋಮೂತ್ರದಲ್ಲಿರುವ ಔಷದೀಯ ಗುಣಗಳನ್ನು ಕೊಂಡಾಡಿದ ಐಐಟಿ ಮದ್ರಾಸ್ ನಿರ್ದೇಶಕ
ಸಾಲ್ಕೋಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಭೀಕರ ಸರಣಿ ಕೃತ್ಯಗಳು ನಡೆಯುತ್ತಿದ್ದು, ಕಳೆದ ಒಂದು ತಿಂಗಳಲ್ಲಿ ಹದಿನೈದು ದನಗಳು ನಾಪತ್ತೆಯಾಗಿವೆ. ಆರಂಭದಲ್ಲಿ ಈ ದನಗಳು ಚಿರತೆ ದಾಳಿಗೆ ಬಲಿಯಾಗಿರಬಹುದು ಎಂದು ಮಾಲೀಕರು ಭಾವಿಸಿದ್ದರು. ಆದರೆ, ಇತ್ತೀಚೆಗೆ ನಡೆದ ಒಂದು ಘಟನೆ ಸಂಪೂರ್ಣ ಚಿತ್ರವನ್ನು ಬದಲಾಯಿಸಿದೆ.
ಹಸುಗಳ ಕೆಚ್ಚಲು ಕೊಯ್ದ ದುಷ್ಟರು… ಇದೆಂತಾ ವಿಕೃತಿ!
ಒಂದು ಹಸುವನ್ನು ಸ್ಥಳದಲ್ಲೇ ಕೊಂದು, ಅದರ ಮಾಂಸವನ್ನು ಕದ್ದಿರುವ ಘಟನೆ ಬೆಳಕಿಗೆ ಬಂದಿದೆ. ಇದರೊಂದಿಗೆ, ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗುತ್ತಿದ್ದ ದನಗಳನ್ನು ಕಳ್ಳರು ಕದ್ದು ಮಾಂಸಕ್ಕಾಗಿ ಕೊಲ್ಲುತ್ತಿದ್ದಾರೆ ಎಂಬ ಅನುಮಾನ ಬಲವಾಗಿದೆ. ಈ ಹಿಂದೆ ಕಳ್ಳರು ದನಗಳನ್ನು ಕದ್ದು ಬೇರೆಡೆ ಕೊಂದು ಮಾಂಸವನ್ನು ಮಾರಾಟ ಮಾಡುತ್ತಿದ್ದರೆ, ಈ ಬಾರಿ ಸ್ಥಳದಲ್ಲೇ ಕೊಂದಿರುವುದು ಘಟನೆಗೆ ಹೊಸ ತಿರುವು ನೀಡಿದೆ.
ಈ ಸರಣಿ ಕೃತ್ಯಗಳು ಸ್ಥಳೀಯರಲ್ಲಿ ಆತಂಕವನ್ನು ಹೆಚ್ಚಿಸಿದೆ. ರೈತರು ತಮ್ಮ ದನಗಳನ್ನು ಸಂರಕ್ಷಿಸಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವಂತಾಗಿದೆ. ಪೊಲೀಸರು ಈ ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಲು ತನಿಖೆ ನಡೆಸುತ್ತಿದ್ದಾರೆ.