- 50 ವರ್ಷಗಳ ಬಳಿಕ ವರ ಮಹಾಲಕ್ಷ್ಮೀ ಹಬ್ಬದಂದೇ ಇಂದ್ರ ಯೋಗ, ಸರ್ವಾರ್ಥ ಸಿದ್ಧಿ ಯೋಗ ಮತ್ತು ಸುಕರ್ಮ ಯೋಗ ರೂಪುಗೊಳ್ಳುತ್ತಿವೆ
- ಈ ರಾಜಯೋಗದಿಂದ ರಾಶಿಗಳಿಗೆ ಅಪಾರ ಸಂಪತ್ತು, ಆರ್ಥಿಕ ಸುಧಾರಣೆ ಮತ್ತು ಸಾಲಬಾಧೆಯಿಂದ ಮುಕ್ತಿ ಸಿಗಲಿದೆ
- ಈ ರಾಶಿಗಳವರಿಗೆ ಯಶಸ್ಸು, ಐಷಾರಾಮಿ ಜೀವನ ಮತ್ತು ಮಕ್ಕಳಿಂದ ಸಿಹಿ ಸುದ್ದಿ ಸಿಗುವ ಯೋಗವಿದೆ
ಆಗಸ್ಟ್ 8, 2025ರ ಶುಕ್ರವಾರದಂದು, ನಾವೆಲ್ಲರೂ ವರಮಹಾಲಕ್ಷ್ಮಿ ಹಬ್ಬವನ್ನು ಬಹಳ ಸಡಗರ, ಸಂಭ್ರಮದಿಂದ ಆಚರಿಸಲಿದ್ದೇವೆ. ‘ವರ’ ಎಂದರೆ ವರವನ್ನು ಕೊಡುವ ಮತ್ತು ‘ಮಹಾಲಕ್ಷ್ಮಿ’ ಎಂದರೆ ಮಹಾನ್ ಸಂಪತ್ತಿನ ಅಧಿದೇವತೆ ಎಂದರ್ಥ. ವರಮಹಾಲಕ್ಷ್ಮಿ ದೇವಿಯ ಕೃಪೆ ಇದ್ದರೆ, ಭಕ್ತರು ಬೇಡಿದ್ದನ್ನು ಕರುಣಿಸುತ್ತಾಳೆ ಎಂಬುದು ನಮ್ಮ ಅಚಲ ನಂಬಿಕೆ. ಆದರೆ, ಈ ವರ್ಷದ ವರಮಹಾಲಕ್ಷ್ಮಿ ಹಬ್ಬವು ಜ್ಯೋತಿಷ್ಯದ ದೃಷ್ಟಿಯಿಂದ ಇನ್ನಷ್ಟು ವಿಶೇಷವಾಗಿದೆ. ಏಕೆಂದರೆ, ಬರೋಬ್ಬರಿ 50 ವರ್ಷಗಳ ಬಳಿಕ ಈ ಶುಭ ದಿನದಂದೇ ಮೂರು ಅದ್ಭುತ ಯೋಗಗಳು ರೂಪುಗೊಳ್ಳುತ್ತಿವೆ.
50 ವರ್ಷಗಳ ಬಳಿಕ ವರಮಹಾಲಕ್ಷ್ಮೀಯಂದೇ ಈ ರಾಶಿಯವರಿಗೆ ರಾಜಯೋಗ!
ವರಮಹಾಲಕ್ಷ್ಮಿ ಹಬ್ಬದ ವಿಶೇಷ ದಿನವಾದ ನಾಳೆ, ಇಂದ್ರ ಯೋಗ, ಸರ್ವಾರ್ಥ ಸಿದ್ಧಿ ಯೋಗ ಮತ್ತು ಸುಕರ್ಮ ಯೋಗ ಎನ್ನುವ ಮೂರು ಮಹತ್ವದ ಯೋಗಗಳು ಒಂದೇ ದಿನ ರೂಪುಗೊಳ್ಳುತ್ತಿವೆ. ಈ ಯೋಗಗಳ ಸಂಯೋಗವು ಕೆಲವು ಅದೃಷ್ಟಶಾಲಿ ರಾಶಿಗಳ ಪಾಲಿಗೆ ಸಂಪತ್ತಿನ ಸುಧೆಯನ್ನು ಹರಿಸಲಿದೆ. ಅವರಿಗೆ ಸರಾಗವಾಗಿ ಯಶಸ್ಸು ಒಲಿದು ಬರಲಿದ್ದು, ಜೀವನದಲ್ಲಿ ಹಿಂದೆಂದೂ ಕಂಡರಿಯದಷ್ಟು ನೆಮ್ಮದಿ ಮತ್ತು ಸಮೃದ್ಧಿ ಒಲಿಯಲಿದೆ. ಹಾಗಾದರೆ, ಆ ರಾಜಯೋಗ ಪಡೆಯಲಿರುವ ಅದೃಷ್ಟವಂತ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ.
ಧನು ರಾಶಿಯವರ ಮೇಲೆ ಈ ವರಮಹಾಲಕ್ಷ್ಮಿ ಹಬ್ಬದ ದಿನದಿಂದ ಲಕ್ಷ್ಮೀ ದೇವಿಯ ವಿಶೇಷ ಕೃಪೆ ಇರುವುದು. ಇದುವರೆಗೆ ನೀವು ಅನುಭವಿಸಿದ ಕಷ್ಟಗಳಿಗೆ ಶಾಶ್ವತವಾಗಿ ತೆರೆ ಬೀಳುವ ಕಾಲವಿದು. ಸಂಪತ್ತು ಮತ್ತು ಸುಖ ಸಮೃದ್ಧಿ ಹರಿದು ಬಂದು ಐಷಾರಾಮಿ ಜೀವನ ನಿಮ್ಮದಾಗುವುದು. ಕುಟುಂಬದಲ್ಲಿ ಸಂತೋಷ ಹೆಚ್ಚಾಗಲಿದ್ದು, ಮಕ್ಕಳಿಂದ ಯಾವುದಾದರೂ ಒಂದು ಸಿಹಿ ಸುದ್ದಿ ಸಿಗುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ವರಮಹಾಲಕ್ಷ್ಮಿ ಪೂಜೆಯಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಸಂಕಷ್ಟ ಗ್ಯಾರಂಟಿ, ಎಚ್ಚರ!
ವೃಷಭ ರಾಶಿಯವರಿಗೆ ಈ ವರಮಹಾಲಕ್ಷ್ಮಿ ಹಬ್ಬವು ಒಂದು ಹೊಸ ಜೀವನಕ್ಕೆ ಮುನ್ನುಡಿ ಬರೆಯಲಿದೆ. ನಿಮ್ಮ ಜೀವನದಲ್ಲಿ ಅಪಾರ ಸಂಪತ್ತಿನ ಸುಧೆ ಹರಿಯುವುದು. ಲಕ್ಷ್ಮೀ ದೇವಿಯ ಕೃಪೆಯಿಂದ ನೀವು ಎದುರಿಸುತ್ತಿದ್ದ ಎಲ್ಲಾ ಹಣಕಾಸಿನ ಕಷ್ಟಗಳು ನೀಗಲಿವೆ. ಬಹಳ ದಿನಗಳಿಂದ ಕಾಡುತ್ತಿದ್ದ ಸಾಲಬಾಧೆಯಿಂದ ಮುಕ್ತಿ ಪಡೆಯುವಿರಿ ಮತ್ತು ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಕುಂಭ ರಾಶಿಯವರಿಗೆ ವರಮಹಾಲಕ್ಷ್ಮಿ ಹಬ್ಬವು ಬಹಳ ಶುಭ ತರಲಿದೆ. ನಿಮ್ಮ ಜೀವನದಲ್ಲಿ ಹಠಾತ್ ಆರ್ಥಿಕ ಲಾಭವಾಗುವ ಸಾಧ್ಯತೆಗಳಿವೆ. ವೃತ್ತಿಯಾಗಲಿ ಅಥವಾ ವ್ಯವಹಾರವಾಗಲಿ, ನೀವು ಕೈ ಹಾಕುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ನಿಮ್ಮನ್ನು ಅರಸಿಕೊಂಡು ಬರುವುದು. ಲಕ್ಷ್ಮೀ ದೇವಿಯ ಆಶೀರ್ವಾದದಿಂದ ನಿಮ್ಮದೊಂದು ಸುಖ ಸಮೃದ್ಧಿಯ ಜೀವನ ಆರಂಭವಾಗುವುದು.
ಇದನ್ನೂ ಓದಿ: ಗುರು ಸಂಚಾರದಿಂದ ಈ ರಾಶಿಗಳಿಗೆ ಶುಕ್ರದೆಸೆ ಆರಂಭ! ಅದೃಷ್ಟ, ಸಂಪತ್ತು ಹೆಚ್ಚಾಗಲಿದೆ!
ವರಮಹಾಲಕ್ಷ್ಮಿ ಹಬ್ಬದ ಈ ವಿಶೇಷ ದಿನದಂದು ಈ ಅದೃಷ್ಟಶಾಲಿ ರಾಶಿಗಳ ಜೀವನದಲ್ಲಿ ಸುಖ, ಸಂಪತ್ತು ಮತ್ತು ನೆಮ್ಮದಿ ತುಂಬಿ ಬರಲಿ ಎಂದು ಆಶಿಸುತ್ತೇವೆ. (ಸ್ಪಷ್ಟನೆ: ಇಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯ ಮತ್ತು ವಾಸ್ತು ಜ್ಞಾನವನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದು ಧಾರ್ಮಿಕ ನಂಬಿಕೆಗಳಿಗೆ ಸಂಬಂಧಿಸಿದೆ.)
ಆರಾಧ್ಯ ಅವರು ಐದು ವರ್ಷಗಳಿಂದ ಜ್ಯೋತಿಷ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅನುಭವ ಹೊಂದಿರುವ ಕಂಟೆಂಟ್ ರೈಟರ್. ಜ್ಯೋತಿಷ್ಯ ವಿಷಯಗಳನ್ನು ಆಧಾರಿತ ಮಾಹಿತಿಯೊಂದಿಗೆ ಸಂಶೋಧಿಸಿ, ಸರಳ ಮತ್ತು ನಿಖರ ರೀತಿಯಲ್ಲಿ ಓದುಗರಿಗೆ ತಲುಪಿಸುವಲ್ಲಿ ಅವರಿಗೆ ವಿಶೇಷ ನೈಪುಣ್ಯ ಇದೆ. ವಿಶ್ವಾಸಾರ್ಹ ಮತ್ತು ಉಪಯುಕ್ತ ಮಾಹಿತಿಯನ್ನು ನೀಡುವುದು ಅವರ ಬರವಣಿಗೆಯ ಮೂಲ ಸಿದ್ಧಾಂತ.
