
- ಇವರು ಕಷ್ಟದಲ್ಲಿರುವವರಿಗೆ ಧಾವಿಸಿ ಸಹಾಯ ಮಾಡುತ್ತಾರೆ
- ಆರ್ಥಿಕ, ಮಾನಸಿಕ, ನ್ಯಾಯಯುತ ಬೆಂಬಲ ನೀಡಿ ಸಮಾಜದಲ್ಲಿ ಬದಲಾವಣೆ ತರಲು ಬಯಸುತ್ತಾರೆ
- ನ್ಯಾಯಕ್ಕಾಗಿ ಹೋರಾಡುವ ಮನಸ್ಸು
ನಮ್ಮ ಸಮಾಜದಲ್ಲಿ ಕೆಲವರು ತಮ್ಮ ಕಷ್ಟದಲ್ಲಿದ್ದಾಗ ಮಾತ್ರ ಇತರರ ನೆರವನ್ನು ಬಯಸುತ್ತಾರೆ. ಆದರೆ, ಇನ್ನು ಕೆಲವರು ಮತ್ತೊಬ್ಬರ ಕಷ್ಟವನ್ನು ಕಂಡರೆ ಸಾಕು, ತಾವಾಗಿಯೇ ಮುಂದೆ ನಿಂತು ಸಹಾಯ ಮಾಡಲು ಸಿದ್ಧರಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ಗುಣ ಸ್ವಭಾವಗಳು ಅವರ ರಾಶಿಚಕ್ರ ಚಿಹ್ನೆಯ ಮೇಲೆ ಆಧಾರಿತವಾಗಿರುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಈ ಗುಣಗಳನ್ನು ಅರಿಯುವ ಮೂಲಕ ನಾವು ವ್ಯಕ್ತಿಗಳ ಮನೋಭಾವನೆಗಳನ್ನು ತಿಳಿದುಕೊಳ್ಳಬಹುದಾಗಿದೆ.
ಹಾಗಾದರೆ, 12 ರಾಶಿಚಕ್ರ ಚಿಹ್ನೆಗಳಲ್ಲಿ ಯಾವ ರಾಶಿಯವರು ನಿಜವಾಗಿಯೂ ಪರೋಪಕಾರಿ ಮನಸ್ಸು ಹೊಂದಿರುತ್ತಾರೆ? ಯಾರು ಕಷ್ಟ ಎಂದರೆ ಎಲ್ಲಿದ್ದರೂ ಓಡಿಬಂದು ಸಹಾಯಕ್ಕೆ ನಿಲ್ಲುತ್ತಾರೆ ಎಂದು ನೋಡೋಣ ಬನ್ನಿ:
ಸಹಾಯ ಹಸ್ತ ಚಾಚುವ ಉದಾರ ಮನಸ್ಸಿನ 6 ರಾಶಿಗಳು
ವೃಷಭ ರಾಶಿ (Taurus): ವೃಷಭ ರಾಶಿಯವರು ಕೇವಲ ಮಾತುಗಳಲ್ಲಿ ಸಹಾಯ ಮಾಡುವುದಿಲ್ಲ, ಬದಲಿಗೆ ನಿಜ ಜೀವನದಲ್ಲಿ ಚಾರಿಟಬಲ್ ಟ್ರಸ್ಟ್ಗಳು ಅಥವಾ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಅಗತ್ಯ ಇರುವವರಿಗೆ ಆರ್ಥಿಕ ಸಹಾಯವನ್ನು ಒದಗಿಸಲು ಇವರು ಸದಾ ಮುಂದಿರುತ್ತಾರೆ. ಹೀಗಾಗಿ, ವೃಷಭ ರಾಶಿಯವರು ಬೇರೆಯವರಿಗೆ ಬೇಕಾಗಿರುವಂತಹ ಸಹಾಯವನ್ನು ಸರಿಯಾದ ಸಮಯದಲ್ಲಿ ಮತ್ತು ಪ್ರಾಯೋಗಿಕವಾಗಿ ಒದಗಿಸುವಲ್ಲಿ ನಿಸ್ಸೀಮರು.
ಮೇಷ ರಾಶಿ (Aries): ಮೇಷ ರಾಶಿಯವರು ಅನಿರೀಕ್ಷಿತವಾಗಿ ಒದಗಿ ಬಂದಂತಹ ಪರಿಸ್ಥಿತಿಗಳಲ್ಲಿ, ಯಾರ ಸಹಾಯವೂ ಇಲ್ಲದವರಿಗೆ ನೆರವು ನೀಡಲು ಎಂದಿಗೂ ಹಿಂಜರಿಯುವುದಿಲ್ಲ. ಅವರಲ್ಲಿರುವಂತಹ ಉದಾರ ಮತ್ತು ಧಾರಾಳ ಮನೋಭಾವನೆಯು ಇದರಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. ಸಹಾಯ ಮಾಡಲು ಅವರು ಆ ವ್ಯಕ್ತಿಯ ಪರಿಚಯವಿರಬೇಕು ಎಂದು ಸಹ ಅಂದುಕೊಳ್ಳುವುದಿಲ್ಲ; ಕಷ್ಟದಲ್ಲಿದ್ದಾನೆಂದರೆ ಸಾಕು, ಒಡನೆಯೇ ನೆರವಿಗೆ ಧಾವಿಸುತ್ತಾರೆ.
ಸಿಂಹ ರಾಶಿ (Leo): ಸಿಂಹ ರಾಶಿಯವರು ತಮ್ಮ ದೊಡ್ಡ ಮನಸ್ಸಿಗೆ ಹೆಸರುವಾಸಿಯಾದವರು. ಸಮಾಜದಲ್ಲಿ ಇರುವಂತಹ ಅಸಹಾಯಕ ಜನರಿಗೆ ಸಹಾಯ ಮಾಡುವಂತಹ ಮತ್ತು ಬೇರೆ ಬೇರೆ ರೀತಿಯಲ್ಲಿ ಅವರಿಗೆ ಇನ್ನಷ್ಟು ಉತ್ತಮ ಜೀವನವನ್ನು ಕಲ್ಪಿಸಿಕೊಡುವಂತಹ ಸಂಘ ಸಂಸ್ಥೆಗಳಲ್ಲಿ ಸಿಂಹ ರಾಶಿಯವರು ಹೆಚ್ಚಾಗಿ ಗುರುತಿಸಿಕೊಳ್ಳುತ್ತಾರೆ. ಈ ಮೂಲಕ ಸಮಾಜದಲ್ಲಿ ಒಂದು ಉತ್ತಮ ಬದಲಾವಣೆಯನ್ನು ತರಬೇಕು ಎನ್ನುವಂತಹ ಮಹಾನ್ ಮನೋಭಾವನೆ ಅವರಲ್ಲಿರುತ್ತದೆ.
ಇದನ್ನೂ ಓದಿ:100 ವರ್ಷಗಳ ಬಳಿಕ ಏಕಕಾಲಕ್ಕೆ 2 ಮಹಾ ರಾಜಯೋಗ: ಈ 3 ರಾಶಿಗೆ ಅದೃಷ್ಟದ ಸುರಿಮಳೆ, ಕುಬೇರ ಸಂಪತ್ತು ಖಚಿತ!
ಕರ್ಕ ರಾಶಿ (Cancer): ಕರ್ಕ ರಾಶಿಯವರು ಭಾವನಾತ್ಮಕವಾಗಿ ಬಹಳ ಸೂಕ್ಷ್ಮ ಮನಸ್ಸಿನವರು. ಇವರು ಸಹಾಯ ಮಾಡುವುದಕ್ಕೆ ಹೆಚ್ಚು ಯೋಚಿಸುವುದಿಲ್ಲ, ಅದರಲ್ಲೂ ವಿಶೇಷವಾಗಿ ಕಷ್ಟದಲ್ಲಿರುವಂತಹ ಚಿಕ್ಕ ಮಕ್ಕಳು ಮತ್ತು ಪ್ರಾಣಿಗಳ ವಿಚಾರದಲ್ಲಿ ಇವರ ಹೃದಯ ಕರಗುತ್ತದೆ. ಅವರ ನೋವನ್ನು ಕಂಡು ಕಣ್ಣಾಲೆಗಳು ತುಂಬಿದಾಗ, ಕರ್ಕ ರಾಶಿಯವರು ಸಹಾಯ ಮಾಡುವುದಕ್ಕೆ ಸದಾಕಾಲ ಮುಂದೆ ನಿಲ್ಲುತ್ತಾರೆ ಮತ್ತು ಅವುಗಳಿಗೆ ಸಾಂತ್ವನ ನೀಡುತ್ತಾರೆ.
ಕನ್ಯಾ ರಾಶಿ (Virgo): ಕನ್ಯಾ ರಾಶಿಯವರು ಸೂಕ್ಷ್ಮವಾಗಿ ಯೋಚಿಸುವವರಾಗಿದ್ದು, ಆರ್ಥಿಕವಾಗಿ ಹಿಂದುಳಿದಿರುವಂತಹ ವರ್ಗಗಳಿಗೆ ಸಹಾಯ ಮಾಡುವಂತಹ ಸ್ಪಷ್ಟ ಯೋಜನೆಗಳನ್ನು ಹೊಂದಿರುತ್ತಾರೆ. ಇವರು ತಮ್ಮ ಕೈಲಾದಷ್ಟು ಸಹಾಯವನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಾರೆ. ಇನ್ನು, ಈ ರೀತಿಯ ಮಾನವೀಯ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವಂತಹ ಸಂಘ ಸಂಸ್ಥೆಗಳಲ್ಲಿ ಕೂಡ ಕನ್ಯಾ ರಾಶಿಯವರು ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಕೆಲಸವನ್ನು ಮಾಡುತ್ತಾರೆ.
ತುಲಾ ರಾಶಿ (Libra): ತುಲಾ ರಾಶಿಯವರು ನ್ಯಾಯ ಮತ್ತು ಸಮಾನತೆಗೆ ಅತೀವ ಮಹತ್ವ ನೀಡುತ್ತಾರೆ. ಉಳ್ಳವರಿಂದ ಇಲ್ಲದವರಿಗೆ ಯಾವುದಾದರೂ ಅನ್ಯಾಯವಾಗಿದ್ದರೆ, ಅದಕ್ಕೆ ನ್ಯಾಯವನ್ನು ಒದಗಿಸುವುದಕ್ಕಾಗಿ ಯಾವ ಹಂತಕ್ಕೆ ಬೇಕಾದರೂ ತುಲಾ ರಾಶಿಯವರು ಹೋಗುತ್ತಾರೆ. ಇಂದಿನ ಸಮಾಜದಲ್ಲಿ ಇರುವಂತಹ ಮೇಲು-ಕೀಳು, ಬಡವ-ಬಲಿದ, ಶ್ರೀಮಂತ-ಬಡವ ಎನ್ನುವಂತಹ ವಿಭಾಗಿಕರಣವನ್ನು ತುಲಾ ರಾಶಿಯವರು ಇಷ್ಟಪಡುವುದಿಲ್ಲ ಮತ್ತು ಅದನ್ನು ಹೋಗಲಾಡಿಸಲು ಪ್ರಯತ್ನಿಸುತ್ತಾರೆ.
ಇದನ್ನೂ ಓದಿ: ಶನಿ ಕೃಪೆಯಿಂದ ‘ಕೇಂದ್ರ ತ್ರಿಕೋನ ರಾಜಯೋಗ’: ಈ 3 ರಾಶಿಗೆ ಕೋಟ್ಯಾಧಿಪತಿ ಯೋಗ, ಕಷ್ಟಗಳೆಲ್ಲಾ ಮಾಯ!