
30 ಸಾವಿರ ರೂಪಾಯಿಗಿಂತ ಹೆಚ್ಚು ಹಣ ಇದ್ದವರ ಬ್ಯಾಂಕ್ ಖಾತೆ ಕ್ಲೋಸ್ ಆಗುತ್ತೆ ಅನ್ನೋ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾ ಹಲವು ವಿಷಯಗಳಿಗೆ ಜನರ ಜೀವನವನ್ನು ಸುಲಭಗೊಳಿಸಿದೆ. ಆದರೆ ಈ ವಿಷಯವನ್ನು ಕೇಳಿ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಹಾಗಾದರೆ 30 ಸಾವಿರ ರೂಪಾಯಿಗಿಂತ ಹೆಚ್ಚು ಹಣ ಇದ್ದರೆ ನಿಮ್ಮ ಬ್ಯಾಂಕ್ ಖಾತೆ ಕೂಡ ಕ್ಲೋಸ್ ಆಗುತ್ತಾ? ಈ ವಿಷಯದ ಬಗ್ಗೆ ಆರ್ ಬಿ ಐ [RBI] ಏನೆಂದು ಹೇಳಿದೆ ಅಂತ ಈ ಲೇಖನದಲ್ಲಿ ತಿಳಿಯಿರಿ.
ಮೂವತ್ತು ಸಾವಿರ ರೂಪಾಯಿಗಿಂತ ಹೆಚ್ಚು ಹಣ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಇದ್ದರೆ ನಿಮ್ಮ ಅಕೌಂಟ್ ಕ್ಲೋಸ್ ಮಾಡಲಾಗುತ್ತೆ ಎಂದು ರಿಸರ್ವ್ ಬ್ಯಾಂಕ್ ಒಫ್ ಇಂಡಿಯಾ {RBI} ಹೇಳಿದೆ ಅಂತ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಬ್ಯಾಂಕ್ ಹಾಗೂ ಹಣಕ್ಕೆ ಸಂಬಂಧಿಸಿದ ವಿಷಯ ಆಗಿದ್ದರಿಂದ ಸರ್ಕಾರಿ ಸಂಸ್ಥೆ ಪ್ರೆಸ್ ಇನ್ಫರ್ಮೇಷನ್ ಬ್ಯುರೋ ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ನಡೆಸಿದೆ.
Gruhalakshmi Scheme: ಅರ್ಜಿ ಸಲ್ಲಿಸಲು App ರೆಡಿ ಆಯ್ತು.. ಡೌನ್ಲೋಡ್ ಮಾಡುವುದು ಹೇಗೆ?
ತನಿಖೆ ನಡೆಸಿದಾಗ ವೈರಲ್ ಆದಂತಹ ಈ ಫೋಟೋ ಸುಳ್ಳು ಎಂದು ತಿಳಿದುಬಂದಿದೆ. ಈ ವಿಷಯವನ್ನು ಪಿಬಿಐ ಟ್ವೀಟ್ ಮಾಡುವ ಮೂಲಕ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದೆ. ಕೇಂದ್ರ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ನಕಲಿ ಮಾಹಿತಿಯನ್ನು ತಿಳಿಯಲು ನೀವು @PBIFactCheck ಅನ್ನು ಫಾಲೋ ಮಾಡಬಹುದು. ಈ ಒಂದು ಸುದ್ದಿಯಿಂದ ಹಲವು ಜನರಿಗೆ ಗೊಂದಲ ಉಂಟಾಗಿತ್ತು. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದಂತಹ ಸುದ್ದಿ ಸುಳ್ಳು ಎಂದು ತಿಳಿದಿದೆ. ಈ ವಿಷಯವನ್ನು ತಪ್ಪದೇ ಎಲ್ಲರಿಗು ಶೇರ್ ಮಾಡಿ.
ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆದಂತಹ ಫೋಟೋ ಫೇಕ್ ಹಾಗೂ ಈ ಸುದ್ದಿಯನ್ನು ಯಾರು ನಂಬಬೇಡಿ ಎಂದು ಹೇಳಲಾಗಿದೆ. ಈ ಸುದ್ದಿ ಸುಳ್ಳು ಎಂದು ಫ್ಯಾಕ್ಟ್ ಚೆಕ್ [Fact Check] ಮೂಲಕ ತಿಳಿದು ಬಂದಿದೆ. RBI ಈ ಮಾಹಿತಿಯನ್ನು ನೀಡಿಲ್ಲ. ಇದು ಒಂದು ಸುಳ್ಳು ಪೋಸ್ಟ್ ಎಲ್ಲರ ಮೊಬೈಲ್ನಲ್ಲಿ ಹರಿದಾಡುತ್ತಿದೆ .
ಕರ್ನಾಟಕ ರಾಜ್ಯ ಸರ್ಕಾರ ಗೃಹ ಜ್ಯೋತಿ ಯ್ಯೋಜನೆಗೆ ಅರ್ಜಿಯನ್ನು ಸ್ವೀಕಾರ ಮಾಡುತ್ತಿದ್ದು ಗ್ರಾಹಕರು ಈಗ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆದರೆ ಈಗ ಹಲವರಿಗೆ ಸರ್ವರ್ ಸಮಸ್ಯೆ ಇಂದ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೊಸದೊಂದು ಲಿಂಕ್ ಅನ್ನು ನೀಡಿದ್ದಾರೆ. ನೀವು ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸ ಬೇಕು ಅಂದರೆ ಇಲ್ಲಿ ಕ್ಲಿಕ್ ಮಾಡಿ. ಈ ಲಿಂಕ್ ಮೂಲಕ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.