
ನವದೆಹಲಿ, ಏಪ್ರಿಲ್ 24: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕರ ಪ್ರವಾಸಿಗರ ಮೇಲೆ ನಡೆದ ಭೀಕರ ಉಗ್ರ ದಾಳಿಯ ಕುರಿತು ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ನಡುವೆ, ದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಈ ದಾಳಿಯನ್ನು ಸಂಭ್ರಮಿಸಿರಬಹುದೇ ಎಂಬ ಅನುಮಾನಗಳು ಇದೀಗ ತೀವ್ರಗೊಂಡಿವೆ. ಇದಕ್ಕೆ ಪುಷ್ಟಿ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಹರಿದಾಡುತ್ತಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪಹಲ್ಗಾಮ್ನಲ್ಲಿ ದಾಳಿ ನಡೆಯುತ್ತಿದ್ದ ಸಂದರ್ಭದಲ್ಲಿ, ಭಾರತದಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಅನ್ನು ಮುಚ್ಚುವಂತೆ ಸೂಚನೆ ನೀಡಲಾಗಿತ್ತು. ಈ ಸೂಕ್ಷ್ಮ ಪರಿಸ್ಥಿತಿಯ ನಡುವೆಯೂ, ದೆಹಲಿಯ ಪಾಕಿಸ್ತಾನ ಹೈಕಮಿಷನ್ನಲ್ಲಿ ನಿಯೋಜಿತರಾಗಿದ್ದ ಉದ್ಯೋಗಿಯೊಬ್ಬರು ಕೇಕ್ ಹಿಡಿದುಕೊಂಡು ಒಳಗೆ ಹೋಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಮಾಧ್ಯಮದವರು ಈ ಬಗ್ಗೆ ಪ್ರಶ್ನಿಸಿದಾಗ ಆ ಉದ್ಯೋಗಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಹಿಸಿದ್ದು, ಅನುಮಾನಗಳಿಗೆ ಮತ್ತಷ್ಟು ಬಲ ನೀಡಿದೆ.
ಇದನ್ನೂ ಓದಿ: ಮುಸ್ಲಿಂ ಆಗಿ ನನಗೆ ನಾಚಿಕೆಯಾಗುತ್ತಿದೆ: ಪಹಲ್ಗಾಮ್ ದಾಳಿಗೆ ಸಲೀಮ್ ಮರ್ಚಂಟ್ ತೀವ್ರ ಆಕ್ರೋಶ
ಈ ಘಟನೆಯಿಂದಾಗಿ, ಪಾಕಿಸ್ತಾನವು ಪಹಲ್ಗಾಮ್ ದಾಳಿಯಿಂದ ಸಂತೋಷಗೊಂಡಿದೆಯೇ ಮತ್ತು ಅದನ್ನು ಆಚರಿಸಲು ಭಾರತದಲ್ಲೇ ಕೇಕ್ ಕತ್ತರಿಸಲು ಸಿದ್ಧತೆ ನಡೆಸಿತ್ತೇ ಎಂಬ ಊಹಾಪೋಹಗಳು ವ್ಯಾಪಕವಾಗಿ ಹಬ್ಬಿವೆ. ಸತ್ಯ ಏನೇ ಇರಲಿ, ಪಾಕಿಸ್ತಾನಿ ಉದ್ಯೋಗಿಯ ಈ ಮೌನವು ಅನೇಕ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಭದ್ರತೆ ಹಿಂಪಡೆದ ಭಾರತ:
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ವಾತಾವರಣವು ತಾರಕಕ್ಕೇರಿದೆ. ಇದರ ಪರಿಣಾಮವಾಗಿ, ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯ ಭದ್ರತೆಯನ್ನು ಭಾರತ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಕಡಿತಗೊಳಿಸಿದೆ. ಪ್ರಸ್ತುತ, ಪಾಕಿಸ್ತಾನಿ ರಾಯಭಾರ ಕಚೇರಿಯ ಹೊರಗೆ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದೆ ಮೌನ ಆವರಿಸಿದೆ.
ಇದನ್ನೂ ಓದಿ: ದೇಶಾದ್ಯಂತ ನಕಲಿ ₹500 ನೋಟುಗಳ ಚಲಾವಣೆ! ಅಸಲಿ-ನಕಲಿ ಕಂಡುಹಿಡಿಯುವ ಟ್ರಿಕ್ ಇಲ್ಲಿದೆ
The Pakistanis are celebrating the Hindu massacre in Pahalgam with a cake!!
— Priti Gandhi (@MrsGandhi) April 24, 2025
Few minutes ago, a cake was being delivered to the Pakistan High Commission today in New Delhi.
Never Forget! Never Forgive!#PahalgamTerrorAttack pic.twitter.com/OxmyV3Muj8