
Lakshana Serial
ಕಲರ್ಸ್ ಕನ್ನಡದಲ್ಲಿ ಇರುವ ಧಾರಾವಾಹಿಗಳಲ್ಲಿ ಹೆಚ್ಚು ಫೇಮಸ್ ಆಗಿರುವ ಧಾರಾವಾಹಿಗಳಲ್ಲಿ ಲಕ್ಷಣ ಧಾರವಾಹಿ [Lakshana Serial] ಕೂಡ ಒಂದು. ಹಲವು ಅಭಿಮಾನಿಗಳು ಈ ಧಾರಾವಾಹಿಯನ್ನು ತುಂಬಾ ಇಷ್ಟ ಪಟ್ಟು ನೋಡುತ್ತಾರೆ. ಈಗಂತೂ ಧಾರಾವಾಹಿಯಲ್ಲಿ ಮುಖ್ಯ ತಿರುವುಗಳು ಹಾಗೂ ಇಂಟರೆಸ್ಟ್ ಬಂದಿದೆ.
ವೀಕ್ಷರಿಗೆ ಈಗ ಕಾಡುತ್ತಿರುವುದು ಭೂಪತಿ ಹಾಗೂ ನಕ್ಷತ್ರ ಮಾಡುತ್ತಿರುವ ನಾಟಕ. ಅದು ಡೈವೋರ್ಸ್ ನಾಟಕ. ಶ್ವೇತ ಇವರಿಬ್ಬರು ನಿಜವಾಗಿ ಡೈವೋರ್ಸ್ ತೆಗೆದುಕೊಳ್ಳುತ್ತಾರೆ ಎಂದು ನಂಬಿಕೆ ಬರುವ ರೀತಿಯಲ್ಲಿ ಇವರು ನಾಟಕವನ್ನು ಆಡಿದ್ದಾರೆ. ಶ್ವೇತಾ ಎಂಟು ಪೂರ್ತಿಯಾಗಿ ಖುಷಿಯಾಗಿದ್ದಾಳೆ. ಭೂಪತಿ ಡೈವೋರ್ಸ್ ಆದ ನಂತರ ನನ್ನ ಹಾಗೂ ಭೂಪತಿ ಮಾಡುವೆ ಆಗುತ್ತೆ ಎಂದು ತುಂಬಾ ಸಂತಸದಲ್ಲಿದ್ದಾಳೆ.
ಹೀಗೆಯೇ ಡೆವಿಲ್ ಕೂಡ ಅಂತೂ ನನ್ನ ಪ್ಲಾನ್ ಎಲ್ಲವು ಕೂಡ ಸರಿಯಾಗಿ ವರ್ಕ್ ಆಗುತ್ತಿದೆ ಎಂದು ಸಂತಸದಲ್ಲಿದ್ದಾಳೆ. ಹಾಗೆ ಮನೆಯಲ್ಲಿ ಚಂದ್ರಶೇಖರ್ ಆರತಿ ಮನೆಯಲ್ಲಿ ಇಲ್ಲವೆಂದು ಅವಳಿಗೆ ಫೋನ್ ಮಾಡಿರ್ತಾನೆ. ಹಾಗೆಯೆ ಅವನು ತುಂಬಾನೇ ಟೆನ್ಶನ್ ನಲ್ಲಿ ಕೂಡ ಇರ್ತಾನೆ. ಈ ವಿಷಯವನ್ನು ಆರತಿ ಕೇಳಿದಾಗ ಚಂದ್ರಶೇಖರ್ ಧನ್ರಾಜ್ ಬಗ್ಗೆ ವಿಷಯ ಇವತ್ತು ಆಫೀಸ್ ನಲ್ಲಿ ಕೇಳಿಬಂತು. ಧನ್ರಾಜ್ ಬಗ್ಗೆ ಹೆಸರು ಕೇಳಿದ ತಕ್ಷಣ ನನಗೆ ತುಂಬಾ ಭಯ ಆಯಿತು.
ಈ ಧನರಾಜ್ ಮತ್ತೆ ಏನಾದ್ರು ಬಂದ್ರೆ ಏನ್ ಮಾಡೋದು? ಅದೇ ನನಗೆ ಟೆನ್ಶನ್ ಆಗಿದೆ ಎಂದು ಚಂದ್ರ ಶೇಖರ್ ಆರತಿ ಹತ್ತಿರ ಹೇಳುತ್ತಾನೆ. ಅದೇ ಸಮಯದಲ್ಲಿ ಅಲ್ಲೇ ಬಿಭಾರ್ಗವಿ ಕೂಡ ಹೋಗುತ್ತಿರುತ್ತಾಳೆ. ಭಾರ್ಗವಿಯನ್ನು ನೋಡಿದ ತಕ್ಷಣ ಇವಳ ಈ ಸ್ಥಿತಿಗೆ ನಾನೇ ಕರಣ ಆಗಿರಬಹುದು ಎಂದು ನನಗೆ ಅನಿಸುತ್ತೆ ಎಂದು ಚಂದ್ರಶೇಖರ್ ಆರತಿ ಹತ್ತಿರ ಹೇಳುತ್ತಾನೆ.
Kendasampige: ಸುಮನಾ ಹೊಸ ಪ್ಲಾನ್
ಬಿಳಿ ಸೀರೆಯನ್ನೇ ಯಾಕೆ ಉಡುತ್ತಾಳೆ ಭಾರ್ಗವಿ?
ಇದೆ ರೀತಿಯ ಇನ್ನು ಹೆಚ್ಚಿನ ಸುದ್ದಿಗಳನ್ನು ಬೇಗ ಪಡೆಯಲು facebook ಗ್ರೂಪ್ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ.
ಭಾರ್ಗವೀನೆ ಡೆವಿಲ್ ಅಂತ ಎಲ್ಲ ಲಕ್ಷಣ ಧಾರಾವಾಹಿಯ ವೀಕ್ಷಕರಿಗೂ ಗೊತ್ತಿದೆ. ನೀವು ಇದನ್ನು ಕೂಡ ಗಮನಿಸಿರಬಹುದು ಅದೇನೆಂದರೆ ಭಾರ್ಗವಿ ಮನೆಯಲ್ಲಿ ಎಲ್ಲ ಸಮಯದಲ್ಲೂ ಬಿಳಿ ಸೀರೆಯನ್ನು ಉಟ್ಟಿಕೊಂಡು ಇರುತ್ತಾಳೆ. ಆದರೆ ಅವಳು ಡೆವಿಲ್ ಆಗಿ ಕೆಲಸ ಮಾಡುವಾಗ ಬೇರೆ ಬಣ್ಣದ ಸೀರೆಯನ್ನು ಧರಿಸಿರುತ್ತಾಳೆ.
ಬನಾರಸ್ ಬೆಡಗಿ ಎಷ್ಟು ಸುಂದರವಾಗಿದ್ದರೆ ನೋಡಿ
ಅವಳು ವಿಧವೆ ಆಗಿರಬಹುದಾ ಎಂದು ಅನುಮಾನ ಕೂಡ ಬಂದಿರಬಹುದು. ಚಂದ್ರ ಶೇಖರ್ ಭಯಪಟ್ಟಿದು ಕೂಡ ಧನರಾಜ್ ಸಾವಿಗೆ ಇವನೇ ಕರಣ ಆಗಿರಬಹುದಾ? ಎಂದು ಹಲವು ಜನರಿಗೆ ಅನುಮಾನ. ಹಾಗಾಗಿ ಮುಂದಿನ ಸಂಚಿಕೆಗಳಲ್ಲಿ ಈ ವಿಷಯದ ಬಗ್ಗೆ ಚಂದ್ರಶೇಖರ ಹೇಳುವ ಸಂಭವ ಜಾಸ್ತಿ ಇದೆ. ಭಾರ್ಗವಿ ಬೇಕಂತಲೇ ಮನೆಯವರಿಗೆ ಈ ವಿಷಯ ನೆನಪಾಗುತ್ತಿರಲಿ ಎಂದು ಈ ರೀತಿಯಾಗಿ ಬಿಳಿ ಸೀರೆಯನ್ನು ಉಟ್ಟಿರಬಹುದು.