ಕೇರಳದಲ್ಲಿ ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಜಯ ಸಾಧಿಸಿದ ಸಂಭ್ರಮಾಚರಣೆಯ ವೇದಿಕೆಯಲ್ಲಿ ನೀಡಿದ ಹೇಳಿಕೆಗಳು ಇದೀಗ ಸಿಪಿಎಂ ನಾಯಕನಿಗೆ ತೀವ್ರ ಟೀಕೆಯಾಗಿ ಪರಿಣಮಿಸಿವೆ. ಮಲಪ್ಪುರಂ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಿಪಿಎಂ ನಾಯಕ ಸಯೀದ್ ಅಲಿ ಮಜೀದ್ ಮಹಿಳೆಯರ ವಿರುದ್ಧ ಅವಮಾನಕಾರಿಯಾದ ಹಾಗೂ ಸ್ತ್ರೀದ್ವೇಷವನ್ನು ಪ್ರತಿಬಿಂಬಿಸುವ ಮಾತುಗಳನ್ನು ಆಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಕಳೆದ ವಾರ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೇವಲ 47 ಮತಗಳ ಅಂತರದಿಂದ ಜಯಗಳಿಸಿದ್ದ ಸಂಭ್ರಮದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಿಳೆಯರು ಸೇರಿದಂತೆ ನೂರಾರು ಎಡಪಂಥೀಯ ಕಾರ್ಯಕರ್ತರ ಮುಂದೆ ಮಜೀದ್ ಭಾಷಣ ಮಾಡಿದ್ದರು.
ಭಾಷಣದ ವೇಳೆ ಮಜೀದ್ ಅವರು ಮುಸ್ಲಿಂ ಲೀಗ್ ಪಕ್ಷವನ್ನು ಗುರಿಯಾಗಿಸಿಕೊಂಡು, “ಮತಗಳನ್ನು ಸೆಳೆಯಲು ಮಹಿಳೆಯರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಇಳಿಸುತ್ತಿದ್ದಾರೆ” ಎಂದು ಆರೋಪಿಸಿದರು. ಈ ಹೇಳಿಕೆಯೇ ಮೊದಲಿಗೆ ವಿವಾದಕ್ಕೆ ಕಾರಣವಾಯಿತು. ಆದರೆ ಇದಕ್ಕಿಂತಲೂ ಗಂಭೀರವಾಗಿ, ಮಹಿಳೆಯರ ಸ್ಥಾನಮಾನವನ್ನು ಕೀಳಾಗಿ ಚಿತ್ರಿಸುವ ರೀತಿಯ ಹೇಳಿಕೆಗಳನ್ನು ಅವರು ಮುಂದುವರೆಸಿದರು ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಕುಳಿತು ಕೋಮು ದ್ವೇಷ ಹರಡುತ್ತಿದ್ದ ವ್ಯಕ್ತಿಯ ಬಂಧನ
ಕಾರ್ಯಕ್ರಮದಲ್ಲಿ ಮಾತನಾಡುತ್ತಾ,“ನಮ್ಮ ಪಕ್ಷದಲ್ಲೂ ಮದುವೆಯಾದ ಮಹಿಳೆಯರಿದ್ದಾರೆ. ಆದರೆ ಮತಗಳಿಗಾಗಿ ನಾವು ಅವರನ್ನು ಪ್ರದರ್ಶನ ವಸ್ತುಗಳಂತೆ ಬಳಸುವುದಿಲ್ಲ. ಅವರು ಮನೆಯಲ್ಲೇ ಇರಲಿ. ಮದುವೆ ಎನ್ನುವುದು ಮಹಿಳೆಯರೊಂದಿಗೆ ಮಲಗಲು ಮತ್ತು ಮಕ್ಕಳನ್ನು ಹೊಂದಲು” ಮಹಿಳೆಯರನ್ನು ಕೇವಲ ದೈಹಿಕ ಸಂಬಂಧ ಮತ್ತು ಸಂತಾನೋತ್ಪತ್ತಿಗೆ ಮಾತ್ರ ವಿವಾಹದ ಉದ್ದೇಶವೆಂದು ಅವರು ಹೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.ಎಂದು ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮಜೀದ್ ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ಪಕ್ಷಗಳು, ಮಹಿಳಾ ಹಕ್ಕುಗಳ ಸಂಘಟನೆಗಳು ಮತ್ತು ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಗೌರವ ಮತ್ತು ಸಮಾನತೆಯನ್ನು ಪ್ರಶ್ನಿಸುವ ಈ ರೀತಿಯ ಹೇಳಿಕೆಗಳು ರಾಜಕೀಯ ನಾಯಕತ್ವಕ್ಕೆ ಶೋಭಿಸುವುದಲ್ಲ ಎಂದು ಟೀಕಿಸಲಾಗಿದೆ.
ಶ್ರೀ ರಾಮ ಅವರು ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ, ಟ್ರೆಂಡಿಂಗ್ ಕಥೆಗಳು ಹಾಗೂ ಅವುಗಳ ವಿಶ್ಲೇಷಣೆಯನ್ನು ನಿಖರವಾಗಿ ಓದುಗರಿಗೆ ತಲುಪಿಸುವಲ್ಲಿ ಅವರಿಗೆ ವಿಶೇಷ ಪರಿಣತಿ ಇದೆ. ರಾಜಕೀಯ ಸೇರಿದಂತೆ ಹಲವು ವಿಷಯಗಳಿಂದ ಸುದ್ದಿ ಸಂಗ್ರಹಣೆ, ವರದಿಗಾರಿಕೆ ಮತ್ತು ಸಂದರ್ಶನಗಳಲ್ಲಿ ಶ್ರೀ ರಾಮ ಉತ್ತಮ ನೈಪುಣ್ಯ ಪ್ರದರ್ಶಿಸಿದ್ದಾರೆ.
