Kendasampige Kannada serial
ಕಲರ್ಸ್ ಕನ್ನಡದ ಕೆಂಡಸಂಪಿಗೆ [Kendasampige] ಧಾರಾವಿ ಈಗಂತೂ ರೋಚಕ ಕೂತುಹಲದಿಂದ ತುಂಬಿದೆ. ಪ್ರತಿದಿನದ ಸಂಚಿಕೆಗಳಲ್ಲಿ ರೋಚಕ ತಿರುವುಗಳನ್ನು ಧಾರವಾಹಿ ಪಡೆದುಕೊಳ್ಳುತ್ತಿದೆ. ಒಂದು ಕಡೆ ಸುಮನಾ ಕಷ್ಟಪಟ್ಟು ಹೇಗೋ ತೀರ್ಥ ಪ್ರಸಾದ್ ಅನ್ನು ಸಮಾಧಾನ ಮಾಡಬೇಕು ಅನ್ನುವಷ್ಟರಲ್ಲಿ ಸಾಧನ ಹಾಗೂ ನಿತ್ಯ ಸೇರಿ ಮಾಡುವ ಕುತಂತ್ರದಿಂದ. ತೀರ್ಥನ ಮನಸ್ಸು ಹಾಳಾಗಿ ಇಂನ್ಸತು ಮನೆಯಲಿ ಜಗಳಕ್ಕೆ ಕಾರಣವಾಗುತ್ತಿದೆ.
ಈಗ ತೀರ್ಥ ಮನೆಬಿಟ್ಟು ಮಾವನ ಮನೆಗೆ ಹೋಗ್ತೀನಿ ಅಂದಿದ್ದನ್ನು ಸುಮನಾ ಹೇಗೋ ಮಾಡಿ ತಪ್ಪಿಸಿದ್ದಾಳೆ. ಪದ್ಮ ಕೂಡ ತೀರ್ಥನನ್ನು ಮನೆಯಲ್ಲಿ ಇರಿಸಿಕೊಳ್ಳಬೇಕೆಂದು ಹಲವು ಪ್ರಯತ್ನಗಳನ್ನು ಸಹ ಮಾಡಿದ್ದಾರೆ. ಆದರೆ ಜಯರಾಮ ಹಾಗೂ ಸಾಧನ ಸೇರಿ ತೀರ್ಥ ಪ್ರಸಾದ್ನನ್ನು ಆಸ್ಪತ್ರೆಗೆ ಸೇರಿಸಬೇಕಂದು ಹಲವು ಪ್ಲಾನ್ ಮಾಡಿದರು ತೀರ್ಥ ಅವರಿಗೆ ವಾರ್ನಿಂಗ್ ಕೊಟ್ಟು ಕಳುಹಿಸಿದ್ದಾನೆ. ಇವೆಲ್ಲವನ್ನು ನೋಡಿ ಹಾಗೂ ಮನೆಯವರು ಯಾರು ಕೂಡ ಇವನ ಎಲೆಕ್ಷನ್ ಗೆಲ್ಲಲು ಸಹಾಯ ಮಾಡಿಲ್ಲ ಮನೆಯವರು ಯಾರು ಸಹ ವೋಟ್ ಮಾಡಿಲ್ಲ ಎಂದು ಮನೆಯವರ ಮೇಲೆ ತೀರ್ಥನಿಗೆ ತುಂಬಾ ಕೋಪ ಬಂದಿದೆ.
ಹಾಗಾಗಿ ಸುಭಾಷ್ ನನ್ನ ಕರೆದು ಲಾಯರ್ ಮುಕಾಂತರ ನೋಟೀಸ್ ಕಳುಹಿಸಿ ಆಸ್ತಿಯಲ್ಲಿ ಪಾಲನ್ನು ಕೇಳಿದ್ದಾನೆ ತೀರ್ಥ ಪ್ರಸಾದ್. ಈ ಸಮಯದಲ್ಲಿ ಅವನ ಅಪ್ಪ ಕೇಶವ ಪ್ರಸಾದ್ ಮನೆಯಲ್ಲಿ ಇರಲಿಲ್ಲ. ಒಂದೆರಡು ದಿನದ ನಂತರ ಕೇಶವ ಮನೆಗೆ ಬಂದ ಕೂಡಲೇ ಪದ್ಮ ಅವನ ಜೊತೆಗೆ ಜಗಳವನ್ನು ಸಹ ಮಾಡಿರುತ್ತಾಳೆ. ಹಾಗೆ ಮನೆಯಲ್ಲಿ ಅಸ್ತಿ ಪಾಲು ಮಾಡಲು ಹೇಳಿದ್ದಾನೆ ಅಂದ ತಕ್ಷಣ ಕೇಶವನಿಗೆ ಶಾಕ್ ಆಗುತ್ತೆ. ಹಾಗೆ ಇವನು ಈ ತರ ಆಸ್ತಿಯಲ್ಲಿ ಪಾಲನ್ನು ಕೇಳುತ್ತಿದನೆಂದರೆ ಇಟ ನಾನಾ ಮಗ ಆಗಿರೋದಕ್ಕೆ ಸಾಧ್ಯವೇ ಇಲ್ಲ ಎಂದು ಕೇಶವ ಜೋರಾಗಿ ಮನೆಯಲ್ಲಿ ಜಗಳ ಆಡಲು ಶುರು ಮಾಡ್ತಾನೆ. ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಫೇಸ್ಬುಕ್ ಗ್ರೂಪ್ ಜಾಯಿನ್ ಆಗಿ ಇಲ್ಲಿ ಕ್ಲಿಕ್ ಮಾಡಿ.
ನಂತರ ಸಾಧನ ಇದೆ ಸರಿಯಾದ ಸಮಯ ಎಂದು ಇನ್ನೊಂದು ನಾಟಕ ಮಾಡಿ ಸುಮನನಗೆ ಅವಮಾನ ಮಾಡಲು ಮುಂದಾಗುತ್ತಾಳೆ. ಹಾಗೆಯೆ ಮಾವ ನೋಡಿದ್ರಲ್ಲಾ ನಿಮ್ಮ್ಮ ಹೂವು ಮಾರುವ ಸೊಸೆಯನ್ನು ಮದುವೆಯಾಗಿ ಬಂದಿದ್ದಲ್ಲದೆ ಈಗ ಗಂಡನ ತಲೆ ತಿರುಗಿಸಿ ಮನೆಯನ್ನು ಒಡೆದು ಈಗ ಆಸ್ತಿಯಲ್ಲಿ ಪಾಲನ್ನು ಕೇಳಿ ತೀರ್ಥ ಪ್ರಸಾದ್ನನ್ನು ಕರೆದುಕೊಂಡು ಮನೆಬಿಟ್ಟು ಹೋಗುವ ಪ್ಲಾನ್ ಮಾಡಿದ್ದಾಳೆ ಎಂದು ಹೇಳುತ್ತಾಳೆ. ಈ ಮಾತುಗಳನ್ನೆಲ್ಲ ಕೇಳಿ ಸುಮನಾ ಮೇಲೆ ಕೇಶವನಿಗೆ ಕೋಪ ಜೋರಾಗಿ ಬಂದು ಅವಳಿಗೆ ಬಯುತ್ತಾನೆ.
ಭಾರ್ಗವಿಯ ರಹಸ್ಯ ಬಯಲಾಗುತ್ತಾ? ಲಕ್ಷಣ ಧಾರವಾಹಿ ಬಿಗ್ ಟ್ವಿಸ್ಟ್
ನಂತರ ಸುಭಾಷ್ ನಾಟಿ ವೈದ್ಯರನ್ನು ತೀರ್ಥನ ಟ್ರೀಟ್ಮೆಂಟ್ ಗೆ ಅಂತ ಕರೆದುಕೊಂಡು ಬಂದಿರುತ್ತಾನೆ. ಇದನ್ನು ನೋಡಿ ಇವರೆಲ್ಲ ಏನು ಬೇಡ ನಾವು ಇವನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಪರೇಷನ್ ಮಾಡಿಸಿದರೆ ಎಲ್ಲ ಸರಿ ಹೋಗುತ್ತೆ ಎಂದು ಮತ್ತೆ ಮನೆಯಲ್ಲಿ ಕೂಗಾಡಲು ಪ್ರಾರಂಭವಾಗುತ್ತೆ. ಆಗ ಸುಮನಾ ಹೇಳುತ್ತಲೇ ನನಗೆ ಕೂಡ ಹೀಗೆ ಮೂಳೆ ಮುರಿದಾಗ ಕಡಿಮೆ ಸಮಯದಲ್ಲೇ ನನಗೆ ಕಡಿಮೆ ಆಗಿತ್ತು. ಹಾಗಾಗಿ ಈಗ ಸಾಹೇಬ್ರಿಗೆ ಕಡಿಮೆ ಆಗಲಿ ಎಂದು ಈ ನಾಟಿ ವೈದ್ಯರನ್ನು ಕರೆದುಕೊಂಡು ಬರಲು ಹೇಳಿದ್ದೇನೆ . ಒಂದು ಸಲ ಇವರನ್ನು ನೋಡಿದ್ರೆ ಗೊತ್ತಾಗುತ್ತೆ ಅಲ್ವಾ ಎಂದು ಪ್ರಶ್ನೆ ಮಾಡುತ್ತಾಳೆ .
ಇದಕ್ಕೆ ತೀರ್ಥ ಕೂಡ ಹೌದು ಎಂದುಹೇಳುತ್ತಾನೆ. ನಂತರ ನಾಟಿ ವೈದ್ಯರು ಒಂದು ಎಣ್ಣೆಯನ್ನು ಹಚ್ಚಿದ ನಂತರ ಸ್ವಲ್ಪ ಸಮಯ ಆದ ಮೇಲೆ ಅವನಿಗೆ ಬೆನ್ನು ನೋವು ಕಡಿಮೆ ಆಗಿರುತ್ತೆ. ಹಾಗಾದ್ರೆ ಈಗ ತೀರ್ಥನ ಮುಂದಿನ ನಿರ್ಧಾರ ಏನು ಹಾಗೆ ಮನೆಬಿಟ್ಟು ಹೋಗುವುದನ್ನು ತಡೆಯಲು ಸಾಧ್ಯವೇ/ ಎಂದು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಾಗಿದೆ.
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
