- ಪುತ್ರದಾ ಏಕಾದಶಿಯಂದು ಸರ್ವಾರ್ಥ ಸಿದ್ಧಿ ಯೋಗ ಮತ್ತು ರವಿ ಯೋಗ ರೂಪುಗೊಳ್ಳುತ್ತಿದ್ದು, ಇದು 4 ರಾಶಿಗಳಿಗೆ ಅದೃಷ್ಟ ತರಲಿದೆ
- ವೃತ್ತಿಜೀವನದಲ್ಲಿ ಪ್ರಗತಿ, ಆರ್ಥಿಕ ಲಾಭ, ಮತ್ತು ಕುಟುಂಬದಲ್ಲಿ ಸಂತೋಷ ಸಿಗಲಿದೆ
- ಈ ರಾಶಿಗಳವರಿಗೆ ಹೊಸ ಯೋಜನೆಗಳಿಗೆ ಅವಕಾಶ, ಬಡ್ತಿ, ಹೊಸ ಜವಾಬ್ದಾರಿಗಳು, ಹಠಾತ್ ಆರ್ಥಿಕ ಲಾಭ ಮತ್ತು ಸಾಲದಿಂದ ಮುಕ್ತಿ ಸಿಗುವ ಯೋಗವಿದೆ
ಹಿಂದೂ ಧರ್ಮದಲ್ಲಿ ಏಕಾದಶಿ ವ್ರತಕ್ಕೆ ವಿಶೇಷ ಮಹತ್ವವಿದೆ. ಅದರಲ್ಲಿಯೂ, ಮಕ್ಕಳ ಸಂತಾನಭಾಗ್ಯಕ್ಕೆ ಸಂಬಂಧಿಸಿದ ಪುತ್ರದಾ ಏಕಾದಶಿಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಸಂತಾನ ಇಲ್ಲದ ದಂಪತಿಗಳು ಈ ದಿನ ಉಪವಾಸ ಮಾಡಿ, ಭಕ್ತಿಯಿಂದ ಶ್ರೀ ಮಹಾವಿಷ್ಣು ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸಿದರೆ ಅವರ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಮಕ್ಕಳ ದೀರ್ಘಾಯುಷ್ಯ, ಅದೃಷ್ಟ ಮತ್ತು ಸಮೃದ್ಧಿಗಾಗಿ ಈ ವ್ರತವನ್ನು ಆಚರಿಸಲಾಗುತ್ತದೆ.
ಈ ಬಾರಿ ಪುತ್ರದಾ ಏಕಾದಶಿಯು ಇನ್ನಷ್ಟು ವಿಶೇಷವಾಗಿದೆ! ನಾಳೆ, ಅಂದರೆ ಶ್ರಾವಣ ಮಾಸದ ಕೊನೆಯ ಮಂಗಳ ಗೌರಿ ಉಪವಾಸದ ದಿನದಂದು, ಪುತ್ರದಾ ಏಕಾದಶಿಯ ಜೊತೆಗೆ ಎರಡೆರಡು ರಾಜಯೋಗಗಳು ರೂಪುಗೊಳ್ಳುತ್ತಿವೆ. ಸರ್ವಾರ್ಥ ಸಿದ್ಧಿ ಯೋಗ ಮತ್ತು ರವಿ ಯೋಗದ ಅಪರೂಪದ ಸಂಯೋಜನೆಯಿಂದ, ಕೆಲವು ಅದೃಷ್ಟಶಾಲಿ ರಾಶಿಗಳ ಪಾಲಿಗೆ ಹೊಸ ಯುಗ ಆರಂಭವಾಗಲಿದೆ.
ಮೇಷ ರಾಶಿಯವರೇ, ನಾಳೆಯಿಂದ ನಿಮ್ಮ ಅದೃಷ್ಟ ಖುಲಾಯಿಸಲಿದೆ. ಹೊಸ ಯೋಜನೆಗಳನ್ನು ಆರಂಭಿಸಲು ಇದು ಅತ್ಯಂತ ಸೂಕ್ತ ಸಮಯ. ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸಿ ಹೊಸ ಉತ್ತುಂಗಕ್ಕೆ ಏರುವಿರಿ. ಶ್ರಮಕ್ಕೆ ತಕ್ಕಂತೆ ಆರ್ಥಿಕ ಲಾಭವಾಗುವ ಸಾಧ್ಯತೆಗಳಿವೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಕುಟುಂಬದಲ್ಲಿ ಸಂತೋಷದ ವಾತಾವರಣ ನೆಲೆಸುತ್ತದೆ.
ಧನು ರಾಶಿಯವರಿಗೆ ಈ ಏಕಾದಶಿಯು ಶುಭ ಫಲಗಳನ್ನು ತರಲಿದೆ. ಕೆಲಸದ ಸ್ಥಳದಲ್ಲಿ ನಿಮಗೆ ಹೊಸ ಜವಾಬ್ದಾರಿಗಳು ಸಿಗಬಹುದು, ಇದು ನಿಮ್ಮ ಬೆಳವಣಿಗೆಗೆ ಸಹಾಯಕವಾಗುತ್ತದೆ. ಪ್ರವಾಸಕ್ಕೆ ಹೋಗುವ ಸಾಧ್ಯತೆಗಳಿವೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಅನಿರೀಕ್ಷಿತವಾಗಿ ಹಠಾತ್ ಆರ್ಥಿಕ ಲಾಭವಾಗುವುದು, ಇದರಿಂದ ನಿಮ್ಮ ಎಲ್ಲಾ ಸಾಲಗಳು ತೀರಿ, ನೆಮ್ಮದಿಯ ಬದುಕು ನಿಮ್ಮದಾಗುವುದು.
ಇದನ್ನೂ ಓದಿ: ಆಗಸ್ಟ್ 1ರಿಂದ ಈ ರಾಶಿಗಳ ಅದೃಷ್ಟವೇ ಬದಲಾಗಲಿದೆ; ಸಂಪತ್ತಿನ ಸುರಿಮಳೆ, ರಾಜಯೋಗ ಖಚಿತ!
ಮಿಥುನ ರಾಶಿಯವರಿಗೆ ನಾಳೆಯಿಂದ ಅದೃಷ್ಟದ ಬಾಗಿಲು ತೆರೆಯಲಿದೆ. ನಿಮಗೆ ಬಡ್ತಿ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಇದರ ಜೊತೆಗೆ, ನಿಮಗೆ ಹೊಸ ಉದ್ಯೋಗದ ಅವಕಾಶ ಕೂಡ ಎದುರಾಗುವುದು. ನೀವು ಮಾಡುವ ಕೆಲಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುವುದು, ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ನೆಲೆಸಲಿದ್ದು, ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಕುಂಭ ರಾಶಿಯವರಿಗೆ ನಾಳೆ ನಿಜಕ್ಕೂ ಒಂದು ಶುಭ ದಿನ. ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿಯಾಗುವ ಸಾಧ್ಯತೆಗಳಿವೆ. ವ್ಯಾಪಾರಸ್ಥರು ತಮ್ಮ ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಾಭ ಗಳಿಸುವರು. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ, ಇದರಿಂದ ನಿಮಗೆ ಮಾನಸಿಕ ನೆಮ್ಮದಿ ಸಿಗುತ್ತದೆ.
ಸೂಚನೆ: ಇದು ಕೇವಲ ಸಾಮಾನ್ಯ ಜ್ಯೋತಿಷ್ಯದ ಮಾಹಿತಿಯ ಮುಖಾಂತರ ಬರೆಯಲಾಗಿದೆ. ಹೆಚ್ಚಿನ ವಿವರಗಳಿಗಾಳಿ ನುರಿತ ಜ್ಯೋತಿಷ್ಯರನ್ನು ಸಂಪರ್ಕಿಸುವುದು ಉತ್ತಮ
ಆರಾಧ್ಯ ಅವರು ಐದು ವರ್ಷಗಳಿಂದ ಜ್ಯೋತಿಷ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅನುಭವ ಹೊಂದಿರುವ ಕಂಟೆಂಟ್ ರೈಟರ್. ಜ್ಯೋತಿಷ್ಯ ವಿಷಯಗಳನ್ನು ಆಧಾರಿತ ಮಾಹಿತಿಯೊಂದಿಗೆ ಸಂಶೋಧಿಸಿ, ಸರಳ ಮತ್ತು ನಿಖರ ರೀತಿಯಲ್ಲಿ ಓದುಗರಿಗೆ ತಲುಪಿಸುವಲ್ಲಿ ಅವರಿಗೆ ವಿಶೇಷ ನೈಪುಣ್ಯ ಇದೆ. ವಿಶ್ವಾಸಾರ್ಹ ಮತ್ತು ಉಪಯುಕ್ತ ಮಾಹಿತಿಯನ್ನು ನೀಡುವುದು ಅವರ ಬರವಣಿಗೆಯ ಮೂಲ ಸಿದ್ಧಾಂತ.
