ಭಾದ್ರಪದ ಮಾಸದ ಶುಕ್ಲ ಚತುರ್ಥಿ, ಭಕ್ತರಿಗೆ ಅತ್ಯಂತ ಪವಿತ್ರವಾದ ದಿನವಾಗಿದೆ. ಈ ದಿನವನ್ನು ಗಣೇಶ ಚತುರ್ಥಿ ಅಥವಾ ವಿನಾಯಕ ಚತುರ್ಥಿ ಎಂದು ಆಚರಿಸಲಾಗುತ್ತದೆ. ವೈದಿಕ ಪರಂಪರೆಯಂತೆ, ಯಾವುದೇ ಶುಭಕಾರ್ಯ ಆರಂಭಕ್ಕೂ ಮುನ್ನ ವಿಘ್ನ ವಿನಾಶಕ ಗಣಪತಿ ಪೂಜೆಯನ್ನು ಪ್ರಥಮವಾಗಿ ಮಾಡುವುದು ಅವಶ್ಯಕ.
ಈ ವಿಶೇಷ ದಿನದಂದು ಭಕ್ತರು ಭಕ್ತಿಭಾವದಿಂದ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ, ವಿವಿಧ ಫಲಪುಷ್ಪಗಳೊಂದಿಗೆ ಪೂಜೆ ಸಲ್ಲಿಸುತ್ತಾರೆ. ಆದರೆ, ಈ ಎಲ್ಲಾ ಪೂಜೆಗಳ ಮಧ್ಯೆ ಒಂದು ಅತಿ ಮುಖ್ಯವಾದ ವಿಷೇಶ ಗಮನಿಸಬೇಕು, ಗಣೇಶನಿಗೆ ತುಳಸಿ ಎಲೆ ಅರ್ಪಿಸಬಾರದು. ಹೌದು, ಇದು ಆಧ್ಯಾತ್ಮಿಕವಾಗಿ ಅತೀ ಗಂಭೀರವಾದ ವಿಷಯ.
ಹಿಂದೆ ಪುರಾಣದಲ್ಲಿ ಹೇಳುವಂತೆ, ಒಮ್ಮೆ ಗಣೇಶನು ಗಂಗಾ ನದಿಯ ತೀರದಲ್ಲಿ ತಪಸ್ಸು ಮಾಡುತ್ತಿದ್ದನು. ಆಗ ಧರ್ಮದ ಮಗಳು ತುಳಸಿ ದೇವಿಯು ಬಂದಳಂತೆ. ಆಕೆ ತನ್ನ ಮನಸ್ಸನ್ನು ಗಣೇಶನ ಮೇಲೆ ಇಟ್ಟುಕೊಂಡು ಮದುವೆಯ ಮನಸ್ಸು ವ್ಯಕ್ತಪಡಿಸುತ್ತಾಳೆ. ಆದರೆ, ಗಣೇಶನು ಬ್ರಹ್ಮಚಾರಿ ಜೀವನವನ್ನು ಅನುಸರಿಸುತ್ತಿದ್ದ ಕಾರಣ ಆ ಪ್ರಸ್ತಾಪವನ್ನು ತಿರಸ್ಕರಿಸುತ್ತಾನೆ.
ಇದನ್ನೂ ಓದಿ: ಗಣೇಶನ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಪಾಲಿಸಬೇಕಾದ ನಿಯಮಗಳು
ಈ ನಿರಾಕರಣೆಯಿಂದ ತುಳಸಿ ದೇವಿಯು ಕೋಪಗೊಂಡು ಗಣೇಶನಿಗೆ ಶಾಪ ಕೊಡುತ್ತಾಳೆ “ನೀನು ಎರಡು ಮದುವೆಗಳನ್ನು ಮಾಡಬೇಕು.” ಪ್ರತಿಯಾಗಿ, ಗಣೇಶನು ಕೂಡ ತುಳಸಿಗೆ ಶಾಪ ನೀಡುತ್ತಾನೆ: “ನೀನು ರಾಕ್ಷಸನೊಂದಿಗೆ ವಿವಾಹವಾಗಲಿ!” ಈ ಶಾಪಗಳು ಪರಸ್ಪರ ದುರಭಿಪ್ರಾಯವನ್ನು ಹುಟ್ಟಿಸಿ, ಕೊನೆಗೆ ಗಣೇಶನು ತನ್ನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಶಾಶ್ವತವಾಗಿ ನಿರ್ಬಂಧಿಸುತ್ತಾನೆ.
ಗಣೇಶನನ್ನು ಸಂತೋಷಪಡಿಸಲು ಮತ್ತು ಕೃಪೆಪಾತ್ರರಾಗಲು ಇವುಗಳನ್ನು ಪೂಜೆಯಲ್ಲಿ ಅವಶ್ಯಕವಾಗಿ ಬಳಸಿ:
- ಗರಿಕೆ (ದೂರ್ವಾ ಹುಲ್ಲು): ಗಣೇಶನ ಅತಿ ಪ್ರಿಯ.
- ದಾಸವಾಳ ಹೂವು (ಹಿಬ್ಬಿಸ್ಕಸ್): ಶಕ್ತಿಯ ಸಂಕೇತ.
- ಮೋದಕ (ಕಡಲೆಬೇಳೆ ಹುರಣದ ಉಂಡೆ): ಗಣೇಶನ ಬಹುಮಾನದ ನೈವೇದ್ಯ.
- ಶುಭ ಫಲಗಳು: ಬಾಳೆಹಣ್ಣು, ದ್ರಾಕ್ಷಿ ಮುಂತಾದವು.
- ಅರಿಶಿಣ, ಕುಂಕುಮ, ಅಕ್ಶತೆ
ಪೌರಾಣಿಕ ವಚನಗಳಂತೆ ತುಳಸಿ ಎಲೆಗಳನ್ನು ಆರತಿ ಅಥವಾ ನೈವೇದ್ಯದ ಭಾಗವಾಗಿಯೂ ಸೇರಿಸಬಾರದು. ಇದು ಗಣೇಶನಿಗೆ ವಿರೋಧವಾದ ಕಾರ್ಯವೆಂದು ಪರಿಗಣಿಸಲ್ಪಡುತ್ತದೆ.
ಗಣೇಶ ಚತುರ್ಥಿ ಮಾತ್ರವಲ್ಲ, ಯಾವಾಗಲೂ ಭಕ್ತಿಯಿಂದ, ನಿಯಮಬದ್ಧತೆಯಿಂದ ಗಣೇಶನನ್ನು ಪೂಜಿಸುವುದು ನಮ್ಮ ಧಾರ್ಮಿಕ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ. ಆದ್ದರಿಂದ, ಪೂಜೆಯಲ್ಲಿ ತಪ್ಪುಗಳಿಂದ ದೂರವಿದ್ದು, ಪೌರಾಣಿಕ ಮಿತಿಗಳನ್ನು ಗೌರವಿಸಿ ಪೂಜೆ ಸಲ್ಲಿಸಿದರೆ, ಜೀವನದಲ್ಲಿ ಖಂಡಿತವಾಗಿಯೂ ಸಮೃದ್ಧಿ ಮತ್ತು ಶ್ರೇಯಸ್ಸು ಬರಲಿದೆ.
ಆರಾಧ್ಯ ಅವರು ಐದು ವರ್ಷಗಳಿಂದ ಜ್ಯೋತಿಷ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅನುಭವ ಹೊಂದಿರುವ ಕಂಟೆಂಟ್ ರೈಟರ್. ಜ್ಯೋತಿಷ್ಯ ವಿಷಯಗಳನ್ನು ಆಧಾರಿತ ಮಾಹಿತಿಯೊಂದಿಗೆ ಸಂಶೋಧಿಸಿ, ಸರಳ ಮತ್ತು ನಿಖರ ರೀತಿಯಲ್ಲಿ ಓದುಗರಿಗೆ ತಲುಪಿಸುವಲ್ಲಿ ಅವರಿಗೆ ವಿಶೇಷ ನೈಪುಣ್ಯ ಇದೆ. ವಿಶ್ವಾಸಾರ್ಹ ಮತ್ತು ಉಪಯುಕ್ತ ಮಾಹಿತಿಯನ್ನು ನೀಡುವುದು ಅವರ ಬರವಣಿಗೆಯ ಮೂಲ ಸಿದ್ಧಾಂತ.
