
Cow Slaughter: ಬಕ್ರೀದ್ ಗಾಗಿ ಗೋವುಗಳ ಮಾರಣ ಹೋಮ...!
ಬಕ್ರೀದ್ {Eid al Adha} ಹಬ್ಬದ ಹಿನ್ನಲೆ ಅನಧಿಕೃತ ಪ್ರಾಣಿ ವಧೆಯನ್ನು [Cow Slaughter] ನಿರ್ಬಂದಿಸಲಾಗಿದ್ದರೂ ಸಹ ಅಕ್ರಮವಾಗಿ ಗೋವುಗಳ ವಧೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಮುಷ್ಟಿಗೇರಿ ಗ್ರಾಮದಲ್ಲಿರುವ ಒಂದು ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ಅಂದಾಜು 9 ರಿಂದ 10 ಗೋವುಗಳನ್ನು ಕಡಿಯಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಗೋ ಹತ್ಯೆಯನ್ನು ಖಂಡಿಸಿ ಬಾದಾಮಿ ಪಟ್ಟಣದಲ್ಲಿ ಶ್ರೀ ರಾಮ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ ಕೂಡ ನಡೆಸಲಾಯಿತು. ರಸ್ತೆ ಬಂದ್ ಮಾಡಿ ಟೈಯರ್ ಗಳಿಗೆ ಬೆಂಕಿ ಹಾಕಿ ಕಾರ್ಯಕರರು ಆಕ್ರೋಶವನ್ನು ಹೊರಹಾಕಿದರು. ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ದರು. ನಂತರ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಗೋ ಹಂತಕರನ್ನು ಬಂಧಿಸುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.