ಅಯೋಧ್ಯೆಯ ರಾಮಮಂದಿರದ (Ayodhya Ram Mandir) ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಶಂಕಿತ ಉಗ್ರನನ್ನು ಹರಿಯಾಣದ ಫರಿದಾಬಾದ್ನಲ್ಲಿ ಭದ್ರತಾ ಪಡೆಗಳು ಬಂಧಿಸಿವೆ. ಗುಜರಾತ್ ಎಟಿಎಸ್ (ATS), ಕೇಂದ್ರ ಏಜೆನ್ಸಿಗಳು ಮತ್ತು ಫರಿದಾಬಾದ್ ಎಸ್ಟಿಎಫ್ ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತನನ್ನು ಬಂಧಿಸಿವೆ. ಬಂಧಿತ ಆರೋಪಿ ಉತ್ತರ ಪ್ರದೇಶದ ಫೈಜಾಬಾದ್ ನಿವಾಸಿಯಾಗಿದ್ದಾನೆ.
ಶಂಕಿತ ಉಗ್ರನ ಬಳಿ ಎರಡು ಹ್ಯಾಂಡ್ ಗ್ರೆನೇಡ್ಗಳು ಪತ್ತೆಯಾಗಿದ್ದು, ರಾಮಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಗುಜರಾತ್ ಎಟಿಎಸ್, ಕೇಂದ್ರ ಏಜೆನ್ಸಿಗಳು ಮತ್ತು ಪಲ್ವಾಲ್ ಎಸ್ಟಿಎಫ್ (Special Task Force) ಸಹಯೋಗದೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಅಯೋಧ್ಯೆಯ ರಾಮಮಂದಿರವು ಶಂಕಿತ ಉಗ್ರನ ಗುರಿಯಾಗಿತ್ತು ಎಂದು ಮೂಲಗಳು ತಿಳಿಸಿವೆ
ಉತ್ತರ ಪ್ರದೇಶದ 19 ವರ್ಷದ ನಿವಾಸಿ ಅಬ್ದುಲ್ ರೆಹಮಾನ್ನನ್ನು ಶಂಕಿತ ಉಗ್ರನೆಂದು ಗುರುತಿಸಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಶಂಕಿತ ಉಗ್ರನನ್ನು ಭಾನುವಾರ ಬಂಧಿಸಲಾಯಿತು ಮತ್ತು ಫರಿದಾಬಾದ್ನಲ್ಲಿ ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಯಿತು. ಮೂಲಗಳ ಪ್ರಕಾರ, ಗುಜರಾತ್ ಎಟಿಎಸ್ನ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಗುಜರಾತ್ ಎಟಿಎಸ್ ರೆಹಮಾನ್ನನ್ನು ವಿಚಾರಣೆ ನಡೆಸುತ್ತಿದೆ.
ಪೊಲೀಸರ ಪ್ರಕಾರ, ಗುಜರಾತ್ ಎಟಿಎಸ್ನಿಂದ ರೆಹಮಾನ್ ದೊಡ್ಡ ಭಯೋತ್ಪಾದಕ ಕೃತ್ಯಕ್ಕೆ ಸಿದ್ಧತೆ ನಡೆಸುತ್ತಿದ್ದಾನೆ ಎಂಬ ಸ್ಪಷ್ಟ ಮಾಹಿತಿ ದೊರೆತಿದೆ. ಈ ಮಾಹಿತಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಕರಣವನ್ನು ಹರಿಯಾಣ ಪೊಲೀಸರ ಪಲ್ವಾಲ್ ಎಸ್ಟಿಎಫ್ಗೆ ವರ್ಗಾಯಿಸಲಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಎಸ್ಟಿಎಫ್ ಸಿಬ್ಬಂದಿ, ಗುಜರಾತ್ ಎಟಿಎಸ್ ನೀಡಿದ ಅಬ್ದುಲ್ನ ಭಾವಚಿತ್ರದೊಂದಿಗೆ ಪರಿಶೀಲನೆ ಆರಂಭಿಸಿದರು.
ಇದನ್ನೂ ಓದಿ: ಸೂಟ್ ಕೇಸ್ ನಲ್ಲಿ ಕಾಂಗ್ರೆಸ್ ನಾಯಕಿಯ ಶವ ಪತ್ತೆ
ಪಲ್ವಾಲ್ ಎಸ್ಟಿಎಫ್ ಮತ್ತು ಗುಜರಾತ್ ಎಟಿಎಸ್ನ ಜಂಟಿ ಕಾರ್ಯಾಚರಣೆಯ ಮೂಲಕ ಫರಿದಾಬಾದ್ನ ಪಾಲಿಯ ಬನ್ಸ್ ರಸ್ತೆಯಲ್ಲಿ ಅಬ್ದುಲ್ನನ್ನು ಬಂಧಿಸಲಾಯಿತು. ಈ ಸಂದರ್ಭದಲ್ಲಿ ಆತನಿಂದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಘಟನೆಯ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಅಬ್ದುಲ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆತನನ್ನು 10 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಶ್ರೀ ರಾಮ ಅವರು ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ, ಟ್ರೆಂಡಿಂಗ್ ಕಥೆಗಳು ಹಾಗೂ ಅವುಗಳ ವಿಶ್ಲೇಷಣೆಯನ್ನು ನಿಖರವಾಗಿ ಓದುಗರಿಗೆ ತಲುಪಿಸುವಲ್ಲಿ ಅವರಿಗೆ ವಿಶೇಷ ಪರಿಣತಿ ಇದೆ. ರಾಜಕೀಯ ಸೇರಿದಂತೆ ಹಲವು ವಿಷಯಗಳಿಂದ ಸುದ್ದಿ ಸಂಗ್ರಹಣೆ, ವರದಿಗಾರಿಕೆ ಮತ್ತು ಸಂದರ್ಶನಗಳಲ್ಲಿ ಶ್ರೀ ರಾಮ ಉತ್ತಮ ನೈಪುಣ್ಯ ಪ್ರದರ್ಶಿಸಿದ್ದಾರೆ.
